Posts

ಬದುಕ ತೆರೆಯ ಹಿಂದಿನ ಕಥೆಯ ವ್ಯಥೆಗಳು.

Image
  ಈ ಜಗತ್ತು ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಹಲವಾರು ಕಥೆಗಳನ್ನು ಹೇಳುತ್ತೆ. ಅವಳು ಹಾಗಂತೆ, ಅವನು ಹೀಗಂತೆ, ಕೆಲವೊಬ್ಬರಿಗೆ ಅಯ್ಯೋ ಅನ್ನುತ್ತೆ, ಇನ್ನೂ ಕೆಲವರನ್ನು ಗೇಲಿ ಮಾಡುತ್ತದೆ. ಮತ್ತೆ ಕೆಲವರನ್ನು ಟೀಕೆ ಮಾಡುತ್ತದೆ. ಹಾಗೆಯೇ ಕೆಲವೊಬ್ಬರ ಕಥೆಗಳನ್ನು ಹಾಸ್ಯ ಕೂಡ ಮಾಡುತ್ತದೆ. ಇದು ಜಗದ ನಿಯಮ, ಜನರ ನಿಯಮ. ಬದಲಾಯಿಸಲಾಗದಂತಹ ಒಂದು ವಿಷಯ.ಇದು ಕೇವಲ ಜಗದ ಊಹೆಯ ಪ್ರಕಾರ ಯಾರದೋ ಒಬ್ಬರ ಬದುಕು.ಇಂತಹ ಗಾಳಿಸುದ್ದಿಗಳು ಸದ್ದು ಮಾಡುವಾಗ ಪ್ರತಿ ಮನೆಯ ಗೋಡೆಗೂ ಕಿವಿಯಿರುತ್ತದೆ. ಯಾಕೆಂದರೆ ಊಹಾ ಪೋಹಗಳು ನೖಜ್ಯತೆಗಿಂತ ಬಹಳ ಸುಂದರವಾಗಿರುತ್ತದೆ.ಆದರೆ ನಿಜವೇನೆಂದರೆ ಬದುಕು ಯಾರಿಗೂ ಸುಲಭ ಇಲ್ಲ ಇಲ್ಲಿ. ಬದುಕಿನ ಕಷ್ಟಗಳ ಬಿಗಿ ಎಲ್ಲರಿಗೂ ಉರುಳಾಗಿ ಉಸಿರ ಬಿಗಿಯುತಿರುತ್ತದೆ. ಇಲ್ಲಿ ಯಾರ ಬದುಕು ಕೂಡ ನಾವು ಊಹಿದಷ್ಟು ಸುಲಭವಾಗಿಲ್ಲ. ಆದರೆ ಇವೆಲ್ಲವನ್ನು ಬಿಟ್ಟು ಪ್ರತಿಯೊಬ್ಬನಿಗೂ ಒಂದು ಬದುಕಿನ ಕಥೆ ಇರುತ್ತದೆ. ಆ ಕಥೆಯಲ್ಲಿ ಈ ಕಟ್ಟುಕಥೆಯ ತರಹ ವ್ಯಂಗ್ಯ, ಹಾಸ್ಯ, ಟೀಕೆ, ಇದ್ಯಾವುದು ಇರುವುದಿಲ್ಲ. ಒಂದಿಷ್ಟು ಖುಷಿಯ ವಿಚಾರಗಳು ಹಾಗೆಯೇ ಒಂದಷ್ಟು ಕಹಿಯ ನೋವುಗಳು ಅಷ್ಟೇ.. ಇವುಗಳನ್ನು ಆಲಿಸುವವರು ಬಹಳ ಕಡಿಮೆ. ಮೊದಲಿಗೆ ಕೆಲವರು ಕೇಳಬಹುದು. ನಂತರ ಈ ವಿಚಾರಗಳು ಸಪ್ಪೆ ಮತ್ತು ಬೇಸರವೆನಿಸುತ್ತದೆ. ಯಾಕೆಂದರೆ ಈ ಜಗತ್ತು ಮನರಂಜನೆಯನ್ನು ಬಯಸುತ್ತದೆ ಹೊರತು ಸತ್ಯವನ್ನಲ್ಲ. ಈ ಜಗತ್ತಿನಲ್ಲಿ ಪ್ರತಿಯೊಬ್ಬನ ಮನುಷ್ಯನ ಬದುಕು ಕ್ಷಣ...
Image
ನಾವು ಈ ಜಗದಲ್ಲಿ ಯಾರನ್ನೇ ಭೇಟಿಯಾಗಲಿ ಪ್ರತಿ ಜೀವ ಒಂದೊಂದು ನೋವಿನ ಕಥೆಯನ್ನು ಹೇಳುತ್ತದೆ. ಪರರಿಂದ ತನಗಾದ ಅನ್ಯಾಯ, ಕಠಿಣ ಪರಿಸ್ಥಿತಿಯಲ್ಲಿ ತನ್ನನ್ನು ತಾನು ಸದೃಢಗೊಳಿಸಿಕೊಂಡು ಅದನ್ನು ನಿಭಾಯಿಸಿದ ರೀತಿ, ತಮ್ಮ ಭಯಾನಕ ಅನುಭವಗಳು, ಹೀಗೆ ಹತ್ತು ಹಲವಾರು ಭಾವನಾತ್ಮಕವಾದ ಅನುಭವ ಕಥೆಗಳನ್ನು ಕೇಳುತ್ತೇವೆ.ಪ್ರತಿಯೊಬ್ಬರ ಕಥೆಯಲ್ಲೂ ನ್ಯಾಯ ಅವರ ಪರವಿರುತ್ತದೆ. ಅನ್ಯಾಯ ಇತರರಿಂದ ಆಗಿರುತ್ತದೆ. ಆದರೆ ಇಬ್ಬರ ಕಥೆ ಕೇಳಿ ಇಬ್ಬರನ್ನ ಎದುರು ಬದುರು ನಿಲ್ಲಿಸಿ ಕೇಳಿದರೆ ಅಲ್ಲಿ ಕಥೆಯೆ ಬೇರೆ ಇರುತ್ತದೆ. ಇಲ್ಲಿ ಪ್ರತಿ ಘಟನೆಯಲ್ಲೂ ಮನುಷ್ಯ ತನ್ನ ಒಳ್ಳೆಯತನವನ್ನು ತೋರಿಸಲು ಬಯಸುತ್ತಾನೆ ಹೊರತು ತಪ್ಪನಲ್ಲ. ಇದು ಮನುಷ್ಯ ಸಹಜ ಗುಣ. ಯಾಕೆಂದರೆ ಈ ಜಗತ್ತು ಬೇರೆಯವರ ತಪ್ಪು ಕಂಡರೆ ಸಾಕು, ಅವರ ಬದುಕನ್ನು ಹುರಿದು ಹಿಂಸೆ ಮಾಡುತ್ತದೆ.  ಇಂತಹ ಕಥೆಗಳುಈ ಜಗತ್ತಿನಲ್ಲಿ ಪ್ರತಿಯೊಬ್ಬರ ಬದುಕಲ್ಲೂ ಒಂದೊಂದು ಇರುತ್ತದೆ. ಇಲ್ಲಿ ಒಂದು ಕುತೂಹಲಕರವಾದ ವಿಚಾರವೆಂದರೆ ಇಲ್ಲಿ ನಮ್ಮ ಬದುಕಿನ ಕಥೆಗೆ ನಾವೇ ಹೀರೋಗಳು. ನಮ್ಮ ಪ್ರಕಾರ ನಾವೇ ಒಳ್ಳೆಯವರು. ಕೇಡು ಹಾನಿಗಳು ನಮಗೆ ಇತರರಿಂದ ಆಗಿರುತ್ತದೆ ಹೊರತು ಅಲ್ಲಿ ನಮ್ಮ ತಪ್ಪುಗಳು ಏನು ಇರುವುದಿಲ್ಲ ಎಂಬುದು ನಮ್ಮ ಅಭಿಪ್ರಾಯ.ಆದರೆ ನಿಜವಾಗಿ ನೋಡಿದರೆ ಬಹಳಷ್ಟು ಸಲ ತಪ್ಪುಗಳು ಎರಡೂ ಕಡೆ ಇರುತ್ತದೆ. ಆದರೆ ನಾವು ಒಪ್ಪಲು ಸಿದ್ದವಿರುವುದಿಲ್ಲ. ಕಾರಣ ಸಮಾಜದ ಭಯ. ನಾವು ಒಂದು ಘಟನೆ ನಡೆದಾಗ ಅಥವಾ ...

ಇರುವುದೆಲ್ಲವ ಬಿಟ್ಟು....

Image
    "ಏನೆಂದೂ ನಾ ಹೇಳಲಿ ಮಾನವನಾಸೆಗೆ ಕೊನೆಯೆಲ್ಲಿ" ಮನುಷ್ಯನ ಬದುಕಿನಲ್ಲಿ ಆಸೆಯು ಎಂದಿಗೂ ನಿಲ್ಲದ ಒಂದು ನಿರಂತರ ಪ್ರಕ್ರಿಯೆ. ಈ ಬಗ್ಗೆ ಡಾ. ರಾಜಕುಮಾರ್ ಅವರು ಹಾಡಿರುವ ಮೇಲಿನ ಸಾಲುಗಳು ಅಕ್ಷರಸ: ಮನಮುಟ್ಟುವವುಗಳು. ಮನುಷ್ಯ ಯಾಕೆ ಹೀಗೆ?ಮನದಲ್ಲಿ ಚಿಗುರಿ ನಿಲ್ಲದೆ ಓಡುವ ಬಯಕೆಗಳ ಹಿಂಬಾಲಿಸಿ ಕೊನೆಗೆ ಬದುಕನ್ನು ಗೋಳಿನ ತಾಣವನ್ನಾಗಿಸಿ ಬದುಕೆಲ್ಲ ನೆಮ್ಮದಿಯ ಅರಸುವ ಮೂರ್ಖನಾಗುತ್ತಾನೆ. ಈ ಜಗತ್ತಿನಲ್ಲಿ ಸರ್ವ ಸುಖವನ್ನು ಅನುಭವಿಸಿ ಸಾಯುವಷ್ಟು ಆಯಸ್ಸು ಯಾರಿಗಿದೆ.? ಮನುಷ್ಯನ ಸೃಷ್ಟಿಯೇ ವಿಭಿನ್ನ.ಈ ಜಗದಲ್ಲಿ ಪ್ರತಿಯೊಬ್ಬನ ಬದುಕಿಗೂ ಒಂದು ಉದ್ದೇಶ ಇದೆ ನಿಜ. ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ಕರ್ಮಗಳನ್ನು ಪೂರ್ತಿ ಮಾಡಲು ಭೂಮಿ ಮೇಲೆ ಜನ್ಮ ತಾಳುತ್ತಾನೆ ಅನ್ನುವ ನಂಬಿಕೆಯಿದೆ. ಹಾಗೆಯೇ ಇಲ್ಲಿ ಪ್ರತಿಯೊಬ್ಬನ ಪಾತ್ರವೂ ವಿಭಿನ್ನ. ಆದರೆ ಇದನ್ನು ಅರ್ಥ ಮಾಡಿಕೊಳ್ಳದೆ ಬಹಳಷ್ಟು ಜನ ಬೇರೆಯವರನ್ನು ಅನುಕರಿಸಲು ಹೋಗಿ ತಮ್ಮ ಬದುಕಿನ ವಿಭಿನ್ನತೆಯನ್ನು ಕಳೆದುಕೊಂಡು ತಮ್ಮ ಬದುಕಿನ ಅಂದವನ್ನು ತಾವೇ ಕೆಡಿಸಿಕೊಳ್ಳುತ್ತಾರೆ. ಮನುಷ್ಯನ ಬದುಕು ಈ ಜಗತ್ತಿನಲ್ಲಿ "ವೖವವಿಧ್ಯತೆಯಲ್ಲಿ ಏಕತೆ"ಗೆ ಉತ್ತಮ ಉದಾಹರಣೆ. ಅದೆಷ್ಟು ವಿಶೇಷ ವೖಶಿಷ್ಟ್ಯ ಬದುಕಿನ ಕಥೆಗಳು ಈ ಜಗತ್ತಿನಲ್ಲಿ ಇಂದಿಗೂ ಅದ್ಬುತ ಪ್ರದರ್ಶನಗಳನ್ನು ನೀಡುತ್ತಿದೆ. ಈ ಜಗತ್ತಿನಲ್ಲಿ ಬದುಕುವ ಪ್ರತಿ ಸಾಮಾನ್ಯ ಮನುಷ್ಯನ ಬದುಕಿನಲ್ಲೂ ವಿಭಿನ್ನ ವಿಶೇಷ ...

ಒಲವ ಹಲವು ಮುಖಗಳು_1

Image
  ಒಲವ ಹಲವು ಮುಖಗಳು ಈ ಜಗತ್ತು ನಮಗೆ ಹಲವಾರು ವಿಭಿನ್ನವಾದ ಒಲವ ದಂತಕಥೆಗಳನ್ನು ಹೇಳುತ್ತದೆ.ಅದು ಕಾಲ್ಪನಿಕವೂ ಇರಬಹುದು, ವಾಸ್ತವದಲಿ ನಡೆದಿರುವ ಘಟನೆಗಳೂ ಆಗಿರಬಹುದು.ಬದುಕಿನಲ್ಲಿ ಪ್ರೀತಿ ಸಿಂಗಾರಗೊಂಡು ಮೆರೆಯತೊಡಗಿದರೆ ಆ ಚಂದನೇ ಬೇರೆ. ಪ್ರೀತಿಯೇ ಬದುಕಲ್ಲ ನಿಜ. ಆದರೆ ಬದುಕಿನಲ್ಲಿ ಪ್ರೀತಿ ಇದ್ದರೆ ಬದುಕಿನ ಬಣ್ಣಗಳೇ ಬದಲಾಗಿ ಬದುಕು ರಮ್ಯ ಚೖತ್ರಕಾಲವಾಗಿರುತ್ತದೆ.ಆದರೆ ಈ ಪ್ರೀತಿ ಇಲ್ಲಿ ಶುದ್ದವಾಗಿರಬೇಕು. ಇಲ್ಲವಾದರೆ ಬದುಕು ಬಣ್ಣ ಕಳೆದುಕೊಂಡು ಸಪ್ಪೆಯಾಗಬಹುದು. ಈ "ಪ್ರೀತಿ ಪ್ರೇಮ" ಎಲ್ಲ ಕಥೆಗಳಲ್ಲಿ ಓದೋಕೆ ಚೆನ್ನಾಗಿರುತ್ತದೆ. ವಾಸ್ತವದ ಬದುಕಿನಲ್ಲಿ ಬರಿಯ ನರಕದರ್ಶನವೇ ಎನುವುದು ಕೆಲವರ ವಾದ. ಇದೇ ಪ್ರೀತಿಯನ್ನು ಕೆಲವರು ಸ್ವರ್ಗಕ್ಕೂ ಹೋಲಿಸುತ್ತಾರೆ. ಇಲ್ಲಿ ಯಾವುದು ಸರಿ, ಯಾವುದು ತಪ್ಪು? ಇದು ಅವರವರ ಭಾವಕ್ಕೆ ಸರಿಯಾಗಿ ಬದಲಾಗೋ ವಿಷಯನಾ? ಅಥವಾ ಅವರವರ ಬದುಕಿನ ಅನುಭವಕ್ಕೆ ಸೀಮಿತವಾದ ವಿಷಯನಾ? ಇಲ್ಲಿ ಎರಡೂ ನಿಜ. ಪ್ರೀತಿ ಭಾವ ಹಾಗೂ ಬದುಕಿಗೆ ಅಂಟಿದ ನಂಟು.ಅದನ್ನು ಕೇವಲ ಒಂದು ಭಾವವೆಂದುಕೊಂಡರೆ ಅದು ಭಾವವಷ್ಟೆ. ಬದುಕೆಂದುಕೊಂಡರೆ ಅದು ಬದುಕು. ಪ್ರೀತಿ ಆಕರ್ಷಣೆಯಲ್ಲ, ಮೋಹವಲ್ಲ, ಅನುರಾಗವಲ್ಲ, ಅನುಕಂಪವೂ ಅಲ್ಲ. ಪ್ರೀತಿ ಕೇವಲ ಪ್ರೀತಿಯಷ್ಟೆ. ಅದು ಎಂದಿಗೂ ಪರಿಶುದ್ದ. ಪ್ರೀತಿ ಖಂಡಿತ ಒಂದು ಸಂಬಂಧವಲ್ಲ.ನಿಜವಾದ ಪ್ರೀತಿ ಎನ್ನುವುದು ಜೀವ ಜೀವನವನ್ನೆ ಬೆಸೆಯುವ ಒಂದು ನವಿರಾದ ಬಂಧನ.ಅದು ಬಿಗಿಯಾದರೆ ಕ...
Image
  ಹೆಣ್ಣೆಂದರೆ ಈ ಭೂಮಿ ಮೇಲೆ ಹೆಣ್ಣಾಗಿ ಹಲವು ಜಗವನ್ನು ಮೆಚ್ಚಿಸುವುದು ಕಷ್ಟದ ಕೆಲಸ. ಆಕೆ ಹೇಗಿದ್ದರೂ ಒಡಕು ಹುಡುಕುವ ಜಗವನ್ನು ಹೇಗೆ ಮೆಚ್ಚಿಸುವಳು ಅವಳು? ಆದರೆ ಜಗವನ್ನು ಮೆಚ್ಚಿಸೋದೇ ಬದುಕು ಅಂದವರು ಯಾರು?ಬದುಕು ನಮ್ಮಿಷ್ಟದಂತೆ ಬಾಳೋದು ಯಾಕಾಗಬಾರದು? ಇಷ್ಟ ಅಂದ ತಕ್ಷಣ ಸ್ವೇಚ್ಛೆ ಅಲ್ಲ. ಮನಸಾಕ್ಷಿಯ ತಕ್ಕಡಿಯಲಿ ಧರ್ಮ, ನ್ಯಾಯ, ಸತ್ಯದ ಕಡೆ ಇರುವ ವಿಚಾರಗಳು. ಸ್ವತಂತ್ರ, ದಿಟ್ಟ, ನೖತಿಕ ನಿರ್ಧಾರಗಳು. ಸೋಲಿಗಂಜದೆ, ಅನ್ಯಾಯದ ಮನೆಯ ಹೊಸಿಲು ತುಳಿಯದೆ ಧರ್ಮದ ಹಾದಿಯಲ್ಲಿನ ನಿರಂತರ ಪಯಣ.ಕಷ್ಟಗಳ ಕಲ್ಲು ಮುಳ್ಳಿನ ನಡುವೆ ಇಷ್ಟವಾಗಿ ನಡೆಯೋದು... ಈ ಬದುಕನ್ನು ಜಗವು ಮೆಚ್ಚುವುದೇ. ಗೆದ್ದರೆ ಖಂಡಿತ ಮೆಚ್ಚುವುದು.. ಹಾಗೆಯೇ ಸೋತರೆ ಚುಚ್ಚುವುದು... ಶೀರ್ಷಿಕೆ :ಹೆಣ್ಣೆಂದರೆ..... ಆಕೆ ಸೀತೆಯಾದರೆ ಅಪವಾದ ಹೊರಿಸಿ ವನವಾಸಕ್ಕೆಅಟ್ಟುವುದು ಈ ಸಮಾಜ ಒಂದು ವೇಳೆ ಅವಳು ರಾಧೆಯಾದರೆ ಪ್ರೀತಿಯನ್ನು ಕಸಿದು ಬದುಕೆಲ್ಲ ವಿರಹದ ಸಜ ಆಕೆ ದ್ರೌಪದಿಯಾದರೆ, ಮಾಡುವರು ತುಂಬ ಸಭೆಯಲಿ ಅವಮಾನ ಸತಿಯಾಗಿ ಅನುಭವಿಸಿದಳು  ತಂದೆಯಿಂದಲೆ ತನ್ನ ಪತಿಗೆ ಅವಮಾನ ಆಕೆ ಕೇವಲ ಹೆಣ್ಣೆಂಬ ಕಾರಣಕೆ ಕೆಣಕಿ ಕೆದಕಿ ಹುಡುಕುವರು ಒಡಕು. ಆಕೆ ಅದೆಷ್ಟು ನೆಟ್ಟಗಿದ್ದರೂ ಸೊಟ್ಟಗಿರುವ ಸಮಾಜ ಅವಳಲ್ಲಿ ಹುಡುಕುವುದು ಬರಿ ತೊಡಕು ಅವಳಂದವಿದ್ದರೂ ತಪ್ಪು, ಕುರುಪಿಯಾದರೂ ತಪ್ಪು  ವಿದ್ಯೆಯಿದ್ದರೆ ಸೊಕ್ಕು, ಪೆದ್ದಿಯಾದರೆ ಯಾರು ದಿಕ್ಕು? ಹೊರಗಡಿಯಿಟ್ಟರೆ ಅ...

ಪ್ರೀತಿ ನೀ ಹುಟ್ಟೋದೆಲ್ಲಿ

Image
  ಹೇಳು ನೀ ಯಾರು ನನಗೆ?. … . ಒಲವು.. ಪ್ರತಿ ಮನದ ಮನೆಯ ಅತಿಥಿ.. ಕಣ್ಣ ಸನ್ನೆಯ ಸಲಿಗೆಯಲೆ ಬದುಕನ್ನೆ ಸುಲಿಗೆ ಮಾಡುವ ಅಪರಿಚಿತ ಆಗಂತುಕ. ಕನಸುಗಳ ಸುರಿದು ಭಾವಗಳ ದೋಚಿ, ಜೀವ ಜೀವನಕ್ಕಂಟುವ ನಂಟು ಪ್ರೀತಿ.

ಕನಸು ಮನಸಿನ ನಡುವಿನ ಶೀತಲ ಸಮರಗಳು...

Image
ಬದುಕ ನಿಶೆಯೊಳಗಿನಿಂದ....... ಕನಸು ಮನಸಿನ ನಡುವಿನ ಶೀತಲ  ಸಮರಗಳು ಮನುಷ್ಯನ ಬದುಕು,ಏರಿಳಿತಗಳ ದಾರಿಯಲ್ಲಿ ಸಾಗುವ ಒಂದು ಪಯಣ.ಅಲ್ಲಲ್ಲಿ ಕಾಣಸಿಗುವ ಅಪರಿಚಿತ ಕೆಲವು ಸಂಗತಿಗಳಿಬಹುದು,ವಿಚಿತ್ರ ಅನುಭವಗಳು, ನೋವು, ದುಃಖ, ನಲಿವು ಗೆಲುವು,ಹೀಗೆಯೇ ಹತ್ತು ಹಲವು ಏರಿಳಿತಗಳ ನಡುವೆ ಸಾಗುವ ಬದುಕಿನ ಪಯಣದಲ್ಲಿ ಶೀತಲ ಸಮರಗಳು ಸಮರಗಳು ಸರ್ವೆ ಸಾಮಾನ್ಯ.ಇದು ಎರಡು ವ್ಯಕ್ತಿಗಳ ಮಧ್ಯೆಯೂ ಇರಬಹುದು.ಅಥವಾ ಒಂದು ವ್ಯಕ್ತಿ ಮತ್ತು ಅವನ ವ್ಯಕ್ತಿತ್ವದ ನಡುವೆಯೂ ಇರಬಹುದು.ಬದುಕು ಹಲವಾರು ಏರಿಳಿತಗಳೊಂದಿಗೆ ಸಾಗುವಾಗ ಬದುಕಿನ ಸಮತೋಲನದಲ್ಲಿ ಏರುಪೇರಾಗಿ ಮನಸಿನ ಸಾಮರಸ್ಯಕ್ಕೆ ಕೊರತೆಯಾಗುತ್ತದೆ.ನಿಜವೇನೆಂದರೆ ಎಲ್ಲರ ಬದುಕು ಹೀಗೆಯೇ.ಆದರೆ ಇದು ಹೊರ ಪ್ರಪಂಚದ ಬೆಳಕಿಗೆ ಕಾಣದೆ ಪ್ರತಿ ಮನುಷ್ಯನ ಮನದೊಳಗೆ ರಹಸ್ಯವಾಗಿರುತ್ತದೆ. ಈ ಜಗತ್ತಲ್ಲಿ ಪ್ರತಿಯೊಬ್ಬ ಮನುಷ್ಯನು ಹಲವಾರು ಬಿಚ್ಚಿಡಲಾಗದಂತಹ ರಹಸ್ಯಗಳನ್ನು ಮನದ ಕತ್ತಲೆಯ ಕೋಣೆಯಲ್ಲಿ ಬಚ್ಚಿಟ್ಟುಕೊಂಡಿರುತ್ತಾನೆ.ಇದಕ್ಕೆ ಕಾರಣ ಹಲವಾರು ಪರಿಸ್ಥಿತಿಗಳಾದರೂ ಪರಿಣಾಮ ಮಾತ್ರ ಅವನ ಬದುಕಿನ ನೆಮ್ಮದಿಯ ಮೇಲೆ ಬೀರುತ್ತದೆ.ಈ ಕಳೆದುಕೊಂಡ ನೆಮ್ಮದಿಯ ಭರ್ತಿ ಮಾಡುವ ಸಾಧನ "ನಮ್ಮನ್ನು ನಾವು ಮಾಡಿಕೊಳ್ಳುವ ಸಮಾಧಾನ" ಮಾತ್ರ. ನಮ್ಮ ಜನ ಹೇಗಂದ್ರೆ ,ಅವರಿಗೆ ಅವರ ಬದುಕಿನ ನೋವು ಸಮಸ್ಯೆಗಳಿಗಿಂತ ಇತರರ ಬದುಕಿನ ಆಗುಹೋಗುಗಳ ಬಗ್ಗೆಯೇ ಹೆಚ್ಟು ಕುತೂಹಲ.ಅನ್ಯರ ಬಗ್ಗೆ ಸಣ್ಣ ಸುದ್ದಿ ಸಿಕ್ಕರೆ ಸಾಕು,...