ಬದುಕ ನಿಶೆಯೊಳಗಿನಿಂದ ಮೊದಲ ಪುಟ ಈ ಜಗದಲಿ ನಾನ್ಯಾರು??? ಸುಳ್ಳು ಹೇಳಿ ಸವಿಯಾಗಿರಲೇ? ಸತ್ಯ ಹೇಳಿ ಕಹಿಯಾಗಲೇ?ಇತರರ ಮಾತಿಗಂಜಿ ಮುದುರಿ ಮೂಲೆ ಸೇರಲೇ?ನನ್ನತನವನ್ನು ಮರೆಸಿ ಮುಖವಾಡ ಹೂದ್ದು ಜಗವ ಮೆಚ್ಚಿಸಲು ಪ್ರಯತ್ನಿಸಲೆ? ಅಥವ ಮನಸಾಕ್ಷಿ ಒಪ್ಪದನ್ನು ದಿಕ್ಕರಿಸಿ ಕೇವಲ ನನ್ನ ಆತ್ಮೀಯ ಅತ್ಮವನು ನಂಬಲೇ?ಈ ತರಹದ ಗೊಂದಲಗಳು ಎಲ್ಲರ ಬದುಕಿನಲಿ ಸರ್ವೆ ಸಾಮಾನ್ಯ.ಯಾಕೆಂದರೆ ನಾವು ಬದುಕುತಿರುವುದು ಹತ್ತು ಹಲವು ಮನಸ್ಥಿತಿಗಳಿರುವ ಒಂದು ಸಮಾಜದ ಜೊತೆಯಲ್ಲಿ. ಇಲ್ಲಿ ಏನೇ ಕೆಲಸ ಮಾಡಿದರು ಹೂಗಳಿಕೆ ತೆಗಳಿಕೆ ಎರಡನ್ನೂ ಸರಿ ಹೊಂದಿಸಿ ಬಾಳುವುದನ್ನು ಕಲಿಯಬೇಕು..ಹಲವಾರು ಮನಸ್ಥಿತಿಗಳ ಜೊತೆ ನಮ್ಮ ಪರಿಸ್ಥಿತಿಗೆ ಹೊಂದಿಕೊಂಡು ಬಾಳುವಷ್ಟರಲ್ಲಿ ಬಾಳು ಗೋಳಾಗುತ್ತದೆ. ಹೊಗಳಿಕೆ ಎಲ್ಲರ ನೆಚ್ಚಿನ ಸಂಗಾತಿ.ಆದರೆ ತೆಗಳಿಕೆ ಕಂಡರೆ ಮಾತ್ರ ಬಹುದೂರ ಓಡುವರು.ಆದರೆ ಇಲ್ಲಿ ಯಾವುದು ನಿಜವಾಗಿರುತ್ತದೆಯೋ ಅದನ್ನು ಸ್ವೀಕರಿಸುವ ಮನೋಭಾವ ಬಹಳ ಮುಖ್ಯ.ಸಿಹಿ ಕಹಿ ಎರಡೂ ಬದುಕಿಗೆ ಬಹಳ ಮುಖ್ಯ. ಅನ್ಯರ ಮೆಚ್ಚಿಸಿ ಬದುಕಲಾದಿತೇ ಈ ಜಗದಲ್ಲಿ?ಎಲ್ಲರು ಮೆಚ್ಚುವ ವಸ್ತು ಜಗದಲ್ಲಿ ಬಹಳ ವಿರಳ.ಆದ್ದರಿಂದ ಈ ಜಗದಲ್ಲಿ ಇತರರು ಮೆಚ್ಚಬೇಕೆಂಬ ಮನಸ್ಥಿತಿಯಿಂದ ಕೆಲಸ ಮಾಡಿ ಗೆಲ್ಲಲು ಸಾಧ್ಯವಿಲ್ಲ. ನಾವು ಮಾಡುವ ಕೆಲಸಗಳು ನಮಗೆ ಮನತೃಪ್ತಿ ನಿಡಿದರೆ ಸಾಕು.ನಿಜವೇನಂದರೆ ಈ ಜಗದಲ್ಲಿ ನಮಗಾತ್ಮೀಯವಾದದು ನಮ್ಮಆತ್ಮವೊಂದೆ.ಅದರ ಮೇಲೆ ವಿಶ್ವ...
ಬದುಕ ನಿಶೆಯೊಳಗಿನಿಂದ ಅಧ್ಯಾಯ_3 ಈ ಜಗದಲ್ಲಿ ಹೆಣ್ಣು ಹಾಗೂ ಗಂಡು ಇಬ್ಬರೂ ಹಲವಾರು ಪಾತ್ರಗಳ ಮೂಲಕ ಬದುಕ ಸವೆಸುವವರು.ಇಬ್ಬರ ಬದುಕಿನ ಎಲ್ಲ ಪಾತ್ರಗಳು ಸಮಾಜದ ಅವಿಭಾಜ್ಯ ಅಂಗಗಳೆ.ಅಪ್ಪ ಅಮ್ಮ ಅಕ್ಕ ತಮ್ಮ ಗಂಡ ಹೆಂಡತಿ ಮಗ ಮಗಳು ಅತ್ತೆ ಮಾವ ಹೀಗೆ ಪ್ರತಿಯೊಂದು ಪಾತ್ರಕ್ಕೂ ಅದರದೇ ಆದ ತೂಕವಿದೆ.ಈ ಸಮಾಜದಲ್ಲಿ ಬಹುತೇಕವಾಗಿ ಎಲ್ಲರೂ ಹೆಣ್ಣಿನ ಪಾತ್ರವನ್ನು ಶ್ರೇಷ್ಠ ವೆಂದು ಮೆರೆಸಿ ಗಂಡಿನ ಪಾತ್ರ ವನ್ನು ಮರೆಯಲ್ಲಿಟ್ಟರು.ಈ ಜಗದಲ್ಲಿ ಹೆಣ್ಣು ಕರಗೋ ಮಂಜಾದರೆ ಗಂಡಿನ ಮನ ಗಟ್ಟಿ ಶಿಲೆಯೆಂಬ ಮಾತಿದೆ. ಹೆಣ್ಣಿನ ಬದುಕಿಗೆ ಬೆಸೆದಿರುವ ಗಂಡಿನ ಪಾತ್ರದ ವಿಶೇಷತೆ ಈ ಜಗತ್ತಿನ ಕಣ್ಣಿಗೇಕೆ ಕಾಣುತಿಲ್ಲ.ಈ ಪ್ರಪಂಚದಲ್ಲಿ ಬಹುತೇಕವಾಗಿ ಯಾವದೇ ವಿಷಯದಲ್ಲಾಗಲಿ ಹೋಲಿಕೆ ತಾರತಮ್ಯ ಇವೆಲ್ಲ ಸಾಮಾನ್ಯ.ಆದರೆ ಕೆಲವೊಂದು ಅಸಮನತೆಗಳು ತಾರತಮ್ಯಗಳು ಬೆಳಕಿಗೆ ಬಾರದೆ ತನ್ನೊಳಗೆ ಮರಗುತ್ತಿದೆ. ಅದರಲ್ಲಿಆ ಜೀವದ ಮನದ ಮರೆಯಲ್ಲಿ ಮರುಗುತಿರುವ ಗಂಡಿನ ಭಾವನೆಗಳು ಕೂಡ ಒಂದಾಗಿದೆ. ತಾಯಿ.... ಎಲ್ಲರಿಗೂ ಪ್ರಿಯವಾದವಳು, ನವಮಾಸ ಹೊತ್ತವಳು, ಗರ್ಭವೇ ಸೀಳುವಂತ ನೋವಿನ ನಡುವೆ ಜನ್ಮ ಇತ್ತವಳು,ಸಾಕಿ ಸಲಹಿದವಳು, ನಿಜ... ಹಾಗದರೆ ಅಪ್ಪ... ಅವಳ ಈ ಪಾತ್ರಕ್ಕೆ ಸಹಾಯಕ ಮತ್ತು ಪೋಷಕ.ಅಪ್ಪ ಅಂದರೆ ಆಕಾಶ.ಸಂಸಾರಕ್ಕೆ ಅವನೇ ಹೊದಿಕೆ.ಜಗದಲ್ಲಿ ಅವನು ಹೊಗಳಿಕೆಗೆ ನಿಲುಕದ ಆಕಾಶ.ಬಣ್ಣಿಸಲಸಾದ್ಯವಾದ ತ್ಯಾಗಗಳ ಶಿಖರ. ತನ್ನ ಸಂಸ...
ಬದುಕ ನಿಶೆಯೊಳಗಿನಿಂದ.. ಅಧ್ಯಾಯ _2 ಮಾತು ಮರೆತವರು.. ಈಗ ನಾವೆಲ್ಲ ಒಮ್ಮೆ ಕಾಲಚಕ್ರವನ್ನು ಸುಮಾರು ಒಂದು ಹದಿನೈದು ವರ್ಷ ಹಿಂದೆ ಸರಿಸಿ ನೋಡೋಣ್ವ ?. ವಾವ್..ಎಷ್ಟು ಚೆನ್ನಾಗಿತ್ತು ಅಲ್ವ?ಆ ಕಾಲ ನೆನಪಿಗೆ ಬಂದರೆ ಒಂಥರಾ ರೋಮಾಂಚನ. ಆ ಜನಜೀವನ,ಪ್ರಕೃತಿ,ಸಂಸ್ಕೃತಿ,ಸಂಬಂಧ,ಎಲ್ಲವೂ ಆಕಾಶದೆತ್ತರ ಮೆರೆಯುತಿದ್ದ ಒಂದು ಕಾಲ ಅದು.. ಅಲ್ಲಿ ಮನುಷ್ಯನ ಜೀವನಘಟ್ಟಗಳಾದ ಬಾಲ್ಯ ಯೌವ್ವನ ಮುಪ್ಪು ಇವೆಲ್ಲ ಅರಳುವ ಪರಿಯೇ ಬಹಳ ಚಂದವಾಗಿತ್ತು.ಆ ಬದುಕಿಗೆ ಒಂದು ಸುಗಂಧವಿತ್ತು.ಮೊಗ್ಗರಳಿ ಹೂವಾಗಿ ಕಾಯಿ ಹಣ್ಣಾಗಿ ಮತ್ತೆ ಬೀಜ ಮೊಳೆತು ಸಸಿಯಾಗಿ ಜೀವನಚಕ್ರದಲ್ಲಿ ತಿರುತಿರುಗಿ ಚರಿತ್ರೆಯಾಗಿರುವ ಆ ಕಥೆಗಳಿವೆಯಲ್ವ ಅದೇ ನಿಜವಾದ ಬದುಕು.ಆದರೆ ಇಂದು ..?ದಿನಗಳೆಯುತಿದೆ ...ನಿಜ.. ವಯಸ್ಸು ಆಗುತ್ತಿದೆ..ಆದರೆ ಬದುಕು ...ಯಾಂತ್ರಿಕವಾಗಿದೆ.ಇಲ್ಲಿ ಕೃತಕತೆ ಹೊರತು ಬೇರೆ ಏನೂ ಇಲ್ಲ. ಈ ಮೊಬೈಲ್,ಲ್ಯಾಪ್ಟಾಪ್ ,ಇಂಟರ್ನೆಟ್,ಸೋಷಿಯಲ್ ಮೀಡಿಯಾ ಎನುವ ಮಾಯೆಗಳೆಲ್ಲ ನಮಗೆ ಪರಿಚಯವಾಗುವ ಮುನ್ನ ಈ ಜಗವು ಹೇಗಿತ್ತು? ಇಂದು ನಾವು ಅದನ್ನು ನೆನಪಿಸಿಕೊಳ್ಳುವುದಕ್ಕೂ ಸಮಯವಿಲ್ಲದಷ್ಟು ಮೊಬೈಲ್ನ ಮಾಯೆಯೊಳಗೆ ಬಂಧಿಯಾಗಿದ್ದೇವೆ ಎಂದರೆ ನಂಬಲು ಸಾಧ್ಯವಿಲ್ಲ.ಅದರ ಜೊತೆಗೆ ಜಗದ ಎಲ್ಲ ಭೌತಿಕವಾದ ನಂಟು ಕಳಚಿಕೊಂಡು ನೀರವ ಮೌನದೊಡನೆ ಬೆರೆತು ಹೋಗಿದ್ದೇವೆ "ಮಾತು ಬೆಳ್ಳಿ,ಮೌನ ಬಂಗಾರವೆಂಬ ಹಿರಿಯರ ಮಾತಿದೆ.ಬಂಗಾರವೆಂದುಕೊಂಡ ಮೌನಕ್ಕೆ ಬೆಲ...
Comments
Post a Comment